ದೇಶ

ಎರ್ನಾಕುಳಂ : ಕೇರಳದ ಒಂದೇ ಜಿಲ್ಲೆಯಲ್ಲಿ 16 ಬಾಂಗ್ಲಾದೇಶಿಯರನ್ನು ಬಂಧಿಸಿದ ಎಟಿಎಸ್


ಎರ್ನಾಕುಳಂ : ನಕಲಿ ದಾಖಲೆಗಳೊಂದಿಗೆ ಕೇರಳದ ಕೊಚ್ಚಿಯಲ್ಲಿ ತಂಗಿದ್ದ ಆರು ಬಾಂಗ್ಲಾದೇಶಿ ಪ್ರಜೆಗಳಾದ ರಾಕಿವ್ ಶಾಬಾ, ಮೊಹಮ್ಮದ್ ಸೊಹೈಲ್ ಫರಾಜ್, ತಾರೆಕ್, ಸೊಗಿರ್, ಮೈಧಿ ಹಸಿದಾ ಮತ್ತು ಮೊಹಮ್ಮದ್ ಅಗಿನ್ ನ್ನು ರಾಜ್ಯದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಇವರೆಲ್ಲರನ್ನೂ ಕೊಚ್ಚಿಯ ತ್ರಿಪುನಿತುರದಲ್ಲಿ ಬಂಧಿಸಲಾಗಿದೆ.

ನೌಕಾ ಗುಪ್ತಚರ ಇಲಾಖೆಯ ಸುಳಿವಿನ ಮೇರೆಗೆ ಈ ಕ್ರಮ ನಡೆದಿದೆ. ಕಳೆದ ಒಂದು ತಿಂಗಳಲ್ಲಿ ಕೊಚ್ಚಿ ನಗರದಿಂದ ಬಂಧಿಸಲ್ಪಟ್ಟ ಅಕ್ರಮ ಬಾಂಗ್ಲಾದೇಶಿಗಳ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ. ತ್ರಿಪುನಿತುರಾದ ಎರೂರ್‌ನ ಕೊಝಿವೆಟ್ಟುವೇಲಿಯಲ್ಲಿ ಎರಡು ಬಾಡಿಗೆ ಮನೆಗಳಲ್ಲಿ ಹಡಗುಕಟ್ಟೆಯಲ್ಲಿ ಕೆಲಸ ಮಾಡುವ ಜನರು ಮತ್ತು ಕೆಲವು ಬಾಂಗ್ಲಾದೇಶಿಗಳು ವಾಸಿಸುತ್ತಿದ್ದಾರೆ ಎಂದು ರಹಸ್ಯ ತನಿಖೆಯಿಂದ ತಿಳಿದು ಬಂದಿದೆ. ಇದರ ಆಧಾರದ ಮೇಲೆ, ತನಿಖಾ ತಂಡವು ಆ ಮನೆಗೆ ತಲುಪಿ ದಾಳಿ ನಡೆಸಿದೆ.

ಇವರೆಲ್ಲರೂ ಕೆಲಸಗಾರರ ಸೋಗಿನಲ್ಲಿ ಕೇರಳಕ್ಕೆ ನುಸುಳಿದ್ದರು. ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಯುಕೆ ಹಡಗಿನ ಮೇಲೆ 'ಐ ಲವ್ ಪಾಕಿಸ್ತಾನ್' ಎಂದು ಬರೆದಿರುವ ಘಟನೆಯ ನಂತರ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಲಾಗಿತ್ತು.